ಪಿ.ಎಫ್. ಡಬ್ಲ್ಯು. ಸಿ. ಕೆ ಯ ಬಗ್ಗೆ

ಗಂಧದಗುಡಿಯೆಂದೇ ಜನಜನಿತವಾದ ಕರ್ಣಾಟಕದ ಕಾಡು ಮತ್ತು ರಕ್ಷಿತಾರಣ್ಯಗಳ ಸಂರಕ್ಷಣೆಯೇ ಪಿ.ಎಫ್. ಡಬ್ಲ್ಯು. ಸಿ. ಕೆ ಯ ಧ್ಯೇಯವಾಗಿದೆ. ಸ್ಥಳೀಯ ಮತ್ತು ಅನಿವಾಸೀ ಕನ್ನಡಿಗರಿಗೆ ನಮ್ಮ ಕಾನನಗಳ ಅತುಲ್ಯ ಮೌಲ್ಯದ ಬಗ್ಗೆ ತಿಳಿವು ಮೂಡಿಸುವುದರಿಂದ ಇದು ಸಾಧ್ಯ

  • ಕನ್ನಡಿಗರಾದ ನಾವು ಒಗ್ಗಟ್ಟಿನಿಂದ ಹಾಗೂ ಪರಸ್ಪರ ಸಹಕಾರದಿಂದ ನಮ್ಮ ಅರಣ್ಯಗಳನ್ನು  ರಕ್ಷಿಸಿ ಬೆಳೆಸಲು ಸಮರ್ಥರಿದ್ದೇವೆ. 
  • ಈ ನಿಟ್ಟಿನಲ್ಲಿ ನಾವೆಲ್ಲಾ ಒಂದಾಗಿ, ಒಬ್ಬರಿಗೊಬ್ಬರು ಪೂರಕವಾಗಿ ಕಾರ್ಯಶೀಲರಾಗುವ ಅವಶ್ಯಕತೆಯಿದೆ. 
  • ನಾವು ನಮ್ಮ ಮುಂದಿನ ತಲೆಮಾರಿಗಾಗಿ ನಮ್ಮ ಅರಣ್ಯಗಳನ್ನು ಹಾಗೂ ವನ್ಯಜೀವಿಗಳನ್ನು  ಸಂರಕ್ಷಿಸಬೇಕಾಗಿದೆ ಹಾಗೂ ಅದಕ್ಕೆ ಯಾವಾಗಲೂ ಬದ್ಧರಾಗಿರಬೇಕಾಗಿದೆ.

  • ನಮ್ಮ ಕರ್ನಾಟಕದ  ಕಾಡುಗಳನ್ನು ಉಳಿಸಿ ಬೆಳೆಸುವುದು ಕನ್ನಡಿಗರಾದ ನಮ್ಮ ಕರ್ತವ್ಯವಾಗಿದೆ, ಅಲ್ಲದೆ ಕಾಡಿನೊಂದಿಗೆ ನಮಗೆ ಅವಿನಾಭಾವ ಸಂಬಂಧವಿದ್ದು, ಅದರ ರಕ್ಷಣೆ ನಮ್ಮ ಸಂಸ್ಕೃತಿಯೂ ಆಗಿದೆ ಎಂಬುದರ ಅರಿವು ಮೂಡಿಸುವುದು
  • ಜಗತ್ತಿನೆಲ್ಲೆಡೆ ಇರುವ ಕನ್ನಡಿಗರಿಗೆ ಅರಣ್ಯಸಂರಕ್ಷಣೆಯ ಸುದ್ದಿಯನ್ನು ತಲುಪಿಸಿ, ಅವರೂ ಹೇಗೆ ಭಾಗವಹಿಸಬಹುದೆಂಬುದನ್ನು ತಿಳಿಸಿಕೊಡುವುದು. 
  • ಶಾಲಾ ಕಾಲೇಜಿನ ಕನ್ನಡದ ವಿದ್ಯಾರ್ಥಿಗಳಿಗೆ ಅರಣ್ಯದ ಅನುಭವದ ಆಧಾರದಲ್ಲಿ ತಿಳುವಳಿಕೆಯನ್ನು ನೀಡುವ ಕಾರ್ಯಕ್ರಮಗಳನ್ನು ಆಯೋಜಿಸುವುದು.
  • ನಮ್ಮ ಗಂಧದ ಗುಡಿಯ ಸಂರಕ್ಷಣೆಗೆ ಬೇಕಾದ ಹಣ ಸಂಚಯಿಸಲು ಸಹಾಯಮಾಡುವುದು, ಇತ್ಯಾದಿ ……

     

2021-22 ಕಾರ್ಯತಂತ್ರ

  1. ಬಿ.ಆರ.ಟಿ ರಕ್ಷಿತಾರಣ್ಯದ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ (ಕಳ್ಳಬೇಟೆ ತಡೆಯುವ ತಂಡದವರಿಗೆ) , ಅಗತ್ಯ ಸಲಕರಣೆಗಳ ಸಾಮಾಗ್ರಿಗಳನ್ನು (ರೈನ್ ಕೋಟ್, ನೀರಿನ ಬಾಟಲಿಗಳು, ಪಾದರಕ್ಷೆ, ಚೀಲಗಳು, ಬುತ್ತಿ/ಟಿಫಿನ್ ಬಾಕ್ಸ್, ಕೈದೀಪ/ಟಾರ್ಚ್, ಸಮವಸ್ತ್ರ ಇತ್ಯಾದಿ) ಪೂರೈಸುವುದು.
  2. ಮಲೆಮಹದೇಶ್ವರ ಬೆಟ್ಟ ರಕ್ಷಿತಾರಣ್ಯದಲ್ಲಿ ಕಳ್ಳಬೇಟೆಯ ಮೇಲೆ ನಿಗಾವಹಿಸಿ ಕಾಯುವವರಿಗೆ ಜೀವ/ಆರೋಗ್ಯ ವಿಮೆಯನ್ನು ಒದಗಿಸುವುದು
  3. ಬೇಸಗೆ ಕಾಲದಲ್ಲಿ ಕಾಡ್ಗಿಚ್ಚಿನಿಂಹೆದ್ದಾರಿಗಳು, ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಸ್ಥಳೀಯ ರಸ್ತೆಗಳ ಇಕ್ಕೆಲಗಳಲ್ಲಿ ಸ್ಥಳೀಯ ಜಾತಿಯ, ದೇಸಿ ತಳಿಯ ಸಸ್ಯಗಳನ್ನು ನೆಡುವುದು,  ಬೇಸಗೆಯಲ್ಲಿ ಅವುಗಳಿಗೆ ನೀರುಣಿಸುವುದು ಹಾಗೂ ಅವುಗಳು ಬೆಳೆಯುವ ತನಕ ರಕ್ಷಿಸುವುದು.ದ ಅರಣ್ಯವನ್ನು ಕಾಯುವವರಿಗೆ ಆಹಾರ, ನೀರು, ಔಷಧಿ, ಪಾನೀಯ ಮೊದಲಾದ ಅಗತ್ಯ ವಸ್ತುಗಳನ್ನು ಪೂರೈಸುವುದು.
  4. ಹೆದ್ದಾರಿಗಳು, ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಸ್ಥಳೀಯ ರಸ್ತೆಗಳ ಇಕ್ಕೆಲಗಳಲ್ಲಿ ಸ್ಥಳೀಯ ಜಾತಿಯ, ದೇಸಿ ತಳಿಯ ಸಸ್ಯಗಳನ್ನು ನೆಡುವುದು,  ಬೇಸಗೆಯಲ್ಲಿ ಅವುಗಳಿಗೆ ನೀರುಣಿಸುವುದು ಹಾಗೂ ಅವುಗಳು ಬೆಳೆಯುವ ತನಕ ರಕ್ಷಿಸುವುದು.
  5. ಕಾಡಿನ ಮಹತ್ವ, ಜೀವ ವೈವಿದ್ಯತೆಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಶಾಲೆ-ಕಾಲೇಜು ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಬೇಸಿಗೆ ಶಿಬಿರಗಳನ್ನು ಹಮ್ಮಿಕೊಳ್ಳುವುದು.

  6. ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಹಾಗೂ ಕಾಡಿನ ಗಡಿಭಾಗಗಳಲ್ಲಿ ವಾಸಿಸುವ ಜನರಿಗೆ ಆರೋಗ್ಯ ತಪಾಸಣಾ ಶಿಬಿರ ಹಾಗೂ ಜನ ಜಾಗೃತಿ ಶಿಬಿರಗಳನ್ನು  ಕಾಲಕಾಲಕ್ಕೆ ಆಯೋಜಿಸುವುದು.

  7. ಪರಿಸರ-ಪರ ಪ್ರವಾಸೋದ್ಯಮವನ್ನು ಪ್ರೋತ್ಸಾ ಹಿಸುವುದು
  8. ಮಾನವ ಹಾಗೂ ಕಾಡುಪ್ರಾಣಿಗಳ ನಡುವಿನ ಘರ್ಷಣೆ ಕಡಿಮೆಮಾಡಲು, ಕಾಡ್ಗಿಚ್ಚು ಹಾಗೂ ಅರಣ್ಯ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು, ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿ ಕೆಲಸಮಾಡುವುದು.
  9. ಬೇಸಿಗೆಯಲ್ಲಿ ಪ್ರಾಣಿಗಳಿಗೆ ನೀರಿನ ಅಭಾವವಾಗದಂತೆ ಕೆರೆಹಳ್ಳಗಳ ಹೂಳೆತ್ತುವುದು

  10. ಕೆರೆ, ಹಳ್ಳಗಳ ನೀರು ಪೂರೈಕೆ ಕಾರ್ಯಕ್ರಮ
  11. ಕಾಡಿನ ಒಳಗೆ ಹಾಗೂ ಗಡಿಭಾಗಗಳಲ್ಲಿ ಮೇಯುವ, ಅಡ್ಡಾಡುವ ಹಸುಗಳಿಗೆ ರೋಗನಿರೋಧಕ ಚುಚ್ಚುಮದ್ದುಗಳನ್ನು (ವ್ಯಾಕ್ಸಿನ್) ಕೊಡುವುದರ ಮೂಲಕ, ನಾಡಿಂದ ಕಾಡಿಗೆ ರೋಗ ಹರಡದಂತೆ ತಡೆಯುವುದು.

  12. ಕಾಡುಪ್ರಾಣಿಗಳ ಓಡಾಟ ಇರುವಲ್ಲಿ ವಾಸಿಸುವವರಿಗೆ ಹಾಗೂ ಬುಡಕಟ್ಟು ಜನರಿಗೆ ಸೌರದೀಪಗಳ ವ್ಯವಸ್ಥೆ ಮಾಡುವುದು. 

Save

Protect

Preserve

Help

Inspire

get involved

Conservation of our state forest and wildlife